Listen "Power of Attitude - Kannada Motivation"
Episode Synopsis
Power of Attitude - Kannada Motivation🎙️ Listen now and change the way you think — because Right Attitude = Right Life!#KannadaMotivation #PowerOfAttitude #PositiveThinking #Inspiration #KannadaPodcast #Mindset #PanchajanyaIASಎರಡು ಮುದ್ದಾದ ಮಕ್ಕಳು ಆಟ ಆಡ್ತಿವೆ. ನೀವು ಪಕ್ಕದಲ್ಲೇ ನಡಕೊಂಡ್ ಹೋಗ್ತಿದೀರಿ. ಪುಟಾಣಿ ಮಕ್ಕಳ ಆಟವನ್ನು ಕ್ಷಣ ಹೊತ್ತು ನೋಡುತ್ತೀರಿ. ಆಗ, ಅವರ ಚೆಂಡೊಂದು ನಿಮ್ಮ ಕಡೆ ಬಂದು ಬೀಳುತ್ತದೆ. ಅವರಲ್ಲಿ ಓಡುತ್ತ ಬಂದ ಮಗುವೊಂದನ್ನ, "ನಿನ್ ಹೆಸರೇನು ಮರಿ" ಅಂತಾ, ಕೇಳ್ತೀರಿ, "ನಿನಗ್ಯಾಕ್ ಬೇಕೊ" ಎಂದ್ಹೇಳಿ ಚಂಡನ್ನ ತೆಗೆದುಕೊಂಡು ಓಡುತ್ತದೆ. ಮರುಕ್ಷಣ ಚೆಂಡು ತೆಗೆದುಕೊಂಡು ಹೋಗಲು ಬಂದ ಇನ್ನೊಂದು ಮಗು ನೀವು ಕೇಳಿದ ಅದೇ ಪ್ರಶ್ನೆಗೆ, "ನನ್ ಹೆಸರು....." ಅಂತ ಮುದ್ದಾಗಿ, ನಗು ನಗುತ್ತಾ ಹೇಳಿ ಹೋಗುತ್ತದೆ! ಇವರಿಬ್ಬರು ಮುಂದೆ ದೊಡ್ಡವರಾದರು ಅಂದುಕೊಳ್ಳಿ, ನಿಮ್ಮದೇ ಕಂಪೆನಿಯ ಒಂದು Interview ಗೆ ಬಂದ್ರು ಅಂದುಕೊಳ್ಳಿ. ಈಗಲೂ ಅವರ ನಡಾವಳಿಗಳು ಹಾಗೆಯೇ ಇವೆ ಅಂದುಕೊಳ್ಳಿ. (ನೀವು ಸದ್ಯಕ್ಕೆ ಏನೇ ಇದ್ರು, ಪರವಾಗಿಲ್ಲ, ಜಸ್ಟ್ ಇಮ್ಯಾಜಿನ್ ಮಾಡಿಕೊಳ್ಳಿ) ಆಗ Interview Panel ನಲ್ಲಿ ನೀವು ಕುಳಿತಿದೀರಿ ಅಂದುಕೊಳ್ಳಿ, ಉದ್ಯೋಗದ ಆಯ್ಕೆಯಲ್ಲಿ ಮೊದಲಿಗೆ ಯಾರನ್ನು ಆಯ್ದುಕೊಳ್ಳುತ್ತೀರಿ! "ನಿನಗ್ಯಾಕ್ ಬೇಕೊ" ಎಂದವನನ್ನೋ? ಅಥವಾಮುದ್ದಾಗಿ, ಹಸನ್ಮುಖಿಯಾಗಿ, ಹೆಸರು ಹೇಳಿ ಹೋಗಿದ್ದವನನ್ನೋ? Security ಗಾರ್ಡ್ ಅಥವಾ body guard ಹುದ್ದೆಗಾದರೆ, "ನಿನಗ್ಯಾಕ್ ಬೇಕೋ ಎಂದವನೇ ಸೂಕ್ತ" ಆದರೇ, ಘನವಾದ ಹುದ್ದೆಗೆ, CEO ನಂತಹ ನಿರ್ವಹಣಾತ್ಮಕ ಹುದ್ದೆಗಳಿಗೆ ಎರಡನೆಯವನೇ ಸೂಕ್ತ! ಇದು ಪವರ್ ಆಫ್ Attitude! 🔥 ಇತ್ತೀಚೆಗೆ ಒಂದು ಪಾಡಕಾಸ್ಟ್ ನಲ್ಲಿ, Zerodha ಕಂಪನಿಯ ಮುಖ್ಯಸ್ಥರಾದ, ನಿಖಿಲ್ ಕಾಮತ್ ರವರು Mahindra ಕಂಪನಿಯ ಮುಖ್ಯಸ್ಥರನ್ನು ಉದ್ದೇಶಿಸಿ, "ಸರ್ ನಿಮ್ಮ ವೃತ್ತಿ ಜೀವನದಲ್ಲಿ, ನೀವು ವಿಪರೀತವಾಗಿ ಕೊಪಗೊಂಡು ರೇಗಾಡಿದ್ದು ಕೇವಲ 3 ಸಾರಿಯಂತೆ, ಹೌದಾ?" ಎಂದು ಕೇಳಿದ್ದಕ್ಕೆ, "No, 18 ಬಾರಿ ಕೊಪಗೊಂಡಿದ್ದಿದೆ" ಎಂದು ಶಾಂತವಾಗಿಯೇ ಉತ್ತರಿಸಿದರು! 18 ಬಹಳ ಆಯ್ತು ಅನ್ಕೋಬೇಡಿ. 1981 ರಿಂದ ಉದ್ಯೋಗದಲ್ಲಿರುವ ಇವರು, ಇಂದಿನ 2025 ರವರೆಗೆ ಅಂದ್ರೆ, 44 ವರ್ಷಗಳಲ್ಲಿ ತಾಳ್ಮೆ ಕಳೆದುಕೊಂಡದ್ದು, ಕೇವಲ 18 ಬಾರಿ ಮಾತ್ರ! ಇದು ದೊಡ್ಡ ವ್ಯಕ್ತಿಗಳಾದವರ "Secret". ಇದರರ್ಥ, ಯಾರ್ ಏನೇ ಅಂದರೂ "ತೆಪ್ಪಗಿರಬೇಕು" ಅಂತಲ್ಲ! ಕಬ್ಬಿಣ ಕಾದಾಗ ಮಾತ್ರ ಕುಟ್ಟಬೇಕು! ಇತ್ತೀಚಿಗಿನ, ಅಮಿತಾಬ್ ಬಚ್ಚನ್ರವರ KBC ಯಲ್ಲಿ ಬಂದಿದ್ದ, ಮಗು ಮತ್ತು ಆ ಮಗುವಿನ ಅತಿರೇಕದ ವರ್ತನೆ ಕುರಿತು ಅನೇಕ ವಿಮರ್ಶೆಗಳು ನಡೆದವು. ಕಾರಣ ಆ ಮಗುವಿನ ವೈಖರಿ! That is Attitude. Attitude ಕೆಲವೊಮ್ಮೆ ದೃಷ್ಟಿಕೋನವೂ ಹೌದು, ಕೆಲವೊಮ್ಮೆ ವೈಖರಿ-ವರ್ತನೆಯೂ ಹೌದು. ಇಲ್ಲಿನ ಚರ್ಚೆ ವೈಖರಿಯದ್ದು!ನೀವು, ತುಂಬಾ ತುಂಬಾ ದೊಡ್ಡ ವ್ಯಕ್ತಿಗಳಾಗುವವರಿದ್ದರೆ, You have to control Your Attitude! ಕೊಪದಲ್ಲಿ ಆಡುವ ಮಾತು, ಮೈಮರೆತು ಮಾಡುವ ಕಾರ್ಯ ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಡುತ್ತವೆ! ಅದರಲ್ಲೂ ಮುಖ್ಯವಾಗಿ, ತಂದೆ-ತಾಯಿ, ಗುರು-ಹಿರಿಯರಿಗೆ ಗೌರವ ಕೊಡುವುದಂತೂ ತುಂಬಾ ಮುಖ್ಯ. ಇದಕ್ಕೊಂದು ಉದಾಹರಣೆ, ಬಸವಣ್ಣನವರು ಮತ್ತು ಡಾ|| ರಾಜಕುಮಾರರು. ಫಲವಿತ್ತ ರೆಂಬೆ ಬಾಗುತ್ತದೆಗೊನೆ ಹೊತ್ತ ಬಾಳೆ ಬಾಗುತ್ತದೆ, ತೆನೆ ಹೊತ್ತ ದಂಟು ಬಾಗುತ್ತದೆ, ಏನೇನೂ ಇಲ್ಲದುದು ಬೀಗುತ್ತದೆ ನೋಡಾಸ್ವತಂತ್ರ ಧೀರ ಸಿದ್ಧೇಶ್ವರಾ!ಎಂದು ಹೇಳಿದ ಸಿದ್ಧಯ್ಯ ಪುರಾಣಿಕರ ವಚನದಂತೆ,ಬಸವಣ್ಣನವರಾಗಲಿ, ರಾಜಕುಮಾರರಾಗಲಿ, ಎಂದೂ ಬೀಗಲಿಲ್ಲ,ಗಾಂಧೀಜಿಯವರೂ ಅಷ್ಟೇ,ತಾವು ಕೋಲು ಹಿಡಿದುಕೊಂಡೇ, ಬೀಗದೇ,ಬ್ರಿಟಿಷರನ್ನು ಬಾಗಿಸಿದರು!ಸದ್ಯದ ಉದಾಹರಣೆಗೆ ಕೊಡುವುದಾದರೆ,ನಮ್ಮ ಕರ್ನಾಟಕದ ರಾಜಕಾರಣದಲ್ಲಿನಯಡಿಯೂರಪ್ಪರವರನ್ನೇ, ತೆಗೆದುಕೊಳ್ಳಿ,ಎಲ್ಲರಿಗೂ ಕೈ ಮುಗಿತ್ತ ಮುಗಿಯುತ್ತಲೇ ಮುಖ್ಯಮಂತ್ರಿಗಳಾಗಿ ಹೋದ್ರು!2013 ರ ಸಿದ್ಧರಾಮಯ್ಯರವರಿಗೂ, 2025 ರ ಸಿದ್ಧರಾಮಯ್ಯರವರಿಗೂ ವ್ಯತ್ಯಾಸವಿದೆ, ಕಂಡುಹಿಡಿಯಿರಿ!2010 - 12 ರ D K ಶಿವಕುಮಾರರಿಗೂ 2025 ರ D K ಶಿವಕುಮಾರರಿಗೂ ಅಜಗಜಾಂತರ ವ್ಯತ್ಯಾಸವಿದೆ!ನಿಜವಾದ ಯೋಧ,ಯುದ್ಧವನ್ನೇ ಮಾಡುವುದಿಲ್ಲವೆಂದು, ಚೀನಾದ ಗಾದೆಯೊಂದಿದೆ.ಇದಕ್ಕೊಂದು ಉದಾಹರಣೆಯಾಗಿಬುದ್ಧನೇ ಆಗಿಹೋಗಿಲ್ಲವಾ?ಕೊಲ್ಲಲು ಬಂದ ಅಂಗುಲಿಮಾಲ, ಬುದ್ಧನ ಮುಂದೆ ಮಂಡಿಯೂರಿದ್ಯಾಕೆ?ನೀವು, ನಿಮ್ಮ ಸ್ನೇಹಿತರ ಗುಂಪಿನಲ್ಲಿ "ಹವಾ" ಮೆಂಟೇನ್ ಮಾಡಲು, ನಿಮ್ಮ ಕುಟುಂಬದಲ್ಲಿ "ಗತ್ತು" ತೋರಿಸಲು, ತೊಡುವ ತಾತ್ಕಾಲಿಕ Attitudeನ ಮುಖಗವಸು ಬದುಕಿನಲ್ಲಿ ಬಹುದೊಡ್ಡ ಪೆಟ್ಟು ಕೊಡುತ್ತದೆ!ಇದರರ್ಥ, "ಇಲಿಮರಿಯಂತೆ ಬೆಕ್ಕಿಗಂಜಿ ಓಡಿಹೋಗಿ" ಅಂತಲ್ಲ!ನೀರಿನಂತೆ ತಣ್ಣಗೆ, ಮೆತ್ತಗೆ ಇರುವುದ ಕಲಿಯಿರಿ!ಆದರೆ,ಅಗತ್ಯವಿದ್ದಾಗ,ಅದೇ ನೀರು ಬರ್ಫಿನ ಗಟ್ಟಿಯಾಗುವುದನ್ನ,ಅದೇ ನೀರು ಕೊತ ಕೊತ ಕುದಿಯೋದನ್ನಮರೆಯಬೇಡಿ! ಸಮಸ್ಯೆ ಸವಾಲುಗಳಿಗೆ "ಹಾರಾಟ, ಚೀರಾಟ, ಕೈಬಲ, ತೋಳ್ಬಲದಿಂದಲ್ಲ" ಬದಲಿಗೆ ಬುದ್ಧಿ ಬಲದಿಂದ ಉತ್ತರಿಸಿ!ಬೆರಳುಗಳಿಗೆ, ವ್ಯಾಘ್ರನಖ ತೊಟ್ಟಿದ್ದ ಶಿವಾಜಿ,ಅಫಜಲ್ಖಾನ ಮುಂದೆ ಮೊದಲೇ Attitude ತೋರಿಸುತ್ತ ಹೋಗಿದ್ದರೆ, ಅಂವ, ಈ ಕುಳ್ಳ ಚಕ್ರವರ್ತಿಯನ್ನು ಒಂದೇ ಕೈಯಿಂದ ಅನಾಯಾಸವಾಗಿ ಎತ್ತಿ ಒಗೆದುಬಿಡುತ್ತಿದ್ದನೆನೋ!ಆದರೆ, ಚತುರ ಶಿವಾಜಿ ಹಾಗೆ ಮಾಡಲಿಲ್ಲ!So,ನೀವು ದೊಡ್ಡ ದೊಡ್ಡ ಅಧಿಕಾರಿಗಳೋ, ದೊಡ್ಡ ದೊಡ್ಡ ರಾಜಕಾರಣಿಗಳೋಉದ್ಯಮಿಗಳೋ ಆಗಬೇಕು ಎಂದುಕೊಂಡಿದ್ದರೆ,Change your Attitude first!Be Polite, Humble!ನಿಮ್ಮ ಅನಿಸಿಕೆಗಳನ್ನು ತಿಳಿಸಲು : [email protected]
More episodes of the podcast Islamic Forum Podcast
7 Days Mobile Detox Challenge | Stop Phone Addiction| Panchajanya IAS | Kannada Motivation
06/12/2025
Why 2025 Feels Stuck | 7 Challenges You Must Overcome | Panchajanya IAS | Kannada Motivation
05/12/2025
One Decision Can Change Your Destiny | Panchajanya IAS | Motivation in Kannada | Kannada Motivation
18/11/2025
ZARZA We are Zarza, the prestigious firm behind major projects in information technology.